
ಶಿವಮೊಗ್ಗ : ರಾಷ್ಟ್ರೀಯ ಗೋರ್ ಸೇನಾ ಸಂಘಟನೆಯ ರಾಜ್ಯ ಘಟಕದ ವತಿಯಿಂದ ಭಾನುವಾರ ನಗರದ ಬಂಜಾರ ಭವನದಲ್ಲಿ ವಿಶೇಷ ಸಭೆಯನ್ನ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಶಿವಮೊಗ್ಗ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಇದನ್ನೂ ಓದಿ ⇒ ಹಕ್ಕಿಪಿಕ್ಕಿ ಸಮುದಾಯ, ಅಲೆಮಾರಿ ಕುಟುಂಬಗಳಿಗೆ ತಾಡಪಾಲು ನೀಡಿ ಅಗತ್ಯ ನೀಗಿಸುವ ಮಹತ್ಕಾರ್ಯ
![]()
ರಾಷ್ಟ್ರೀಯ ಗೋರ್ ಸೇನಾ ಸಂಘಟನೆಯ ಶಿವಮೊಗ್ಗ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಚಂದ್ರ ನಾಯ್ಕ.ಜಿ, ಉಪಾಧ್ಯಕ್ಷರಾಗಿ ಸಂತೋಷ್ ನಾಯ್ಕ್.ಬಿ.ಪಿ, ಉಪಾಧ್ಯಕ್ಷರಾಗಿ ಲಕ್ಷ್ಮಣ್ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ನಾಯ್ಕ್, ಸಂಘಟನಾ ಕಾರ್ಯದರ್ಶಿಯಾಗಿ ರಘು ನಾಯ್ಕ, ಸಹ ಕಾರ್ಯದರ್ಶಿಯಾಗಿ ಹೇಮಂತ್ ನಾಯ್ಕ್, ನವೀನ್ ನಾಯ್ಕ, ಮತ್ತು ರಘು ನಾಯ್ಕ ಹುಣಸೋಡು, ಖಜಾಂಚಿಯಾಗಿ ಓಂಕಾರ್ ನಾಯ್ಕ್, ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಲಿಂಗರಾಜ್ ಗಾಡಿಕೊಪ್ಪ, ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ಯೋಗೇಂದ್ರ, ಚೇತನ್.ಬಿ.ಟಿ ಮತ್ತು ಚಂದು ನಾಯ್ಕ್ ಮೈಸವಳ್ಳಿ ಸದಸ್ಯರುಗಳಾಗಿ ನೇಮಕವಾಗಿರುತ್ತಾರೆ.
ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಗೋರ್ ಸಿಕವಾಡಿ ಸಾಮಾಜಿಕ ಚಳವಳಿಯು ಅವರ ಸಾಮಾಜಿಕ ಬದ್ಧತೆಗೆ ಶುಭ ಹಾರೈಸಿದೆ.
ಇದನ್ನೂ ಓದಿ ⇒ ಜಿಲ್ಲಾ ಉಸ್ತುವಾರಿ ಸಚಿವರಿಂದ ಮೆಗ್ಗಾನ್ ಆಸ್ಪತ್ರೆಗೆ ದಿಢೀರ್ ಭೇಟಿ-ವೀಕ್ಷಣೆ