ನಾಳೆ ಬೃಹತ್ ಶೋಭಾ ಯಾತ್ರೆ, ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?

ಶಿವಮೊಗ್ಗ : ಜಿಲ್ಲಾ ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ರಾಮನವಮಿ ಹಾಗೂ ಹನುಮ ಜಯಂತಿ ಪ್ರಯುಕ್ತ ಬೃಹತ್ ಶೋಭ ಯಾತ್ರೆಯನ್ನು ನಾಳೆ (ಏ.07 ರ) ಸಂಜೆ 4.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಹ ಸಂಯೋಜಕ ಸುರೇಶ್ ಬಾಬು ಹೇಳಿದರು.

ಇದನ್ನೂ ಓದಿ » ನಾವೀನ್ಯಯುತ ಚಿಂತನೆ ಸಮಾಜ ಉನ್ನತಿಕರಣದ ಶಕ್ತಿ: ಅಶೀಷ್‌ ತ್ರಿಪಾಠಿ

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಭ ಯಾತ್ರೆಯು ಸಂಜೆ 4.00 ಗಂಟೆಗೆ ಗೋಪಿ ವೃತ್ತದಿಂದ ಆರಂಭಗೊಂಡು ಜೈಲ್ ಸರ್ಕಲ್, ಶಿವಮೂರ್ತಿ ವೃತ್ತ ಮಾರ್ಗವಾಗಿ ಉಷಾ ನರ್ಸಿಂಗ್‌ ಹೋಂ ವೃತ್ತದ ಬಳಿ ಸಮಾಪ್ತಿಯಾಗುತ್ತದೆ. ಶೋಭಯಾತ್ರೆಯಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಶೋಭಾಯಾತ್ರೆಯಲ್ಲಿ ಏನೆಲ್ಲಾ ಕಾರ್ಯಕ್ರಮ ನಡೆಯಲಿವೆ ?

  1. ಮುಖ್ಯವಾಗಿ ಮಂಗಳೂರಿನ ಭಜನಾ ತಂಡದಿಂದ ನೃತ್ಯ ಸಂಕೀರ್ತನಾ ಯಾತ್ರೆ.
  2. ನಗರದ ವಿವಿಧ ಭಜನಾ ಮಂಡಳಿಯ ಮಾತೆಯರಿಂದ ಮಾರ್ಗದುದ್ದಕ್ಕೂ ಭಜನಾ ಕಾರ್ಯಕ್ರಮ.
  3. ಸುಮಾರು 20-30 ಆಟೋಗಳಲ್ಲಿ ದೇವರ ಫೋಟೋಗಳೊಂದಿಗೆ ಶೋಭಯಾತ್ರೆ
  4. ಹಿಂದೂಗಳ ಆರಾಧ್ಯ ದೇವರಾದ ಪ್ರಭು ಶ್ರೀರಾಮಚಂದ್ರ, ಆಂಜನೇಯ, ಭಾರತ ಮಾತೆ, ಶಿವಾಜಿ ವಿಗ್ರಹಗಳೊಂದಿಗೆ ಮೆರವಣಿಗೆ.
  5. ಮಕ್ಕಳಿಗೆ ಶಬರಿ, ಸೀತಾಮಾತೆ, ಶ್ರೀರಾಮಚಂದ್ರ, ಹನುಮಂತ ಹೀಗೆ ಹಲವು ವೇಷಭೂಷಣ ಸ್ಪರ್ಧೆ.
  6. ಉಷಾ ನರ್ಸಿಂಗ್ ಹೋಂ ವೃತ್ತದಲ್ಲಿ ಉಪನ್ಯಾಸ ಕಾರ್ಯಕ್ರಮ.
  7. ಅನ್ನ ಸಂತರ್ಪಣೆ ಕಾರ್ಯಕ್ರಮ.
  8. ಮೆರವಣಿಗೆಯ ಸಂದರ್ಭದಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮ

ಹಿಂದೂ ಧರ್ಮದ ಗಣ್ಯರು ವಿಶ್ವಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು, ಸಕಲ ಹಿಂದೂ ಧರ್ಮ ಅಭಿಮಾನಿಗಳು ಶೋಭಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಮೇಶ್ ಬಾಬು, ರಾಜೇಶ್ ಗೌಡ, ಶಶಿಕಲಾ, ಯೋಗೀಶ್ ನಾಯ್ಕ, ವಡಿವೇಲು ರಾಘವನ್ ಮುಂತಾದವರಿದ್ದರು.

ಇದನ್ನೂ ಓದಿ » ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲಿಗೆ ಏ.08 ರಿಂದ ಅತ್ಯಾಧುನಿಕ LHB ಬೋಗಿಗಳ ಅಳವಡಿಕೆ

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...