
ಶಿವಮೊಗ್ಗ : ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.21ರ ದುರ್ಗಿಗುಡಿ, ಕಾಮಾಕ್ಷಿ ಬೀದಿ, ಗಾರ್ಡನ್ ಏರಿಯ ಹಾಗೂ ಸಾವರ್ ಲೈನ್ ರಸ್ತೆಯ ಬಡಾವಣೆಗಳಿಗೆ ಇಂದು ಬೆಳಗ್ಗೆ (ಜುಲೈ 11) ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಬಡಾವಣೆಗಳಲ್ಲಿರುವಂತಹ ಯುಜಿಡಿ ಸಮಸ್ಯೆಗಳು, ಕನ್ಸರ್ವೆನ್ಸಿ ರಸ್ತೆಗಳ ಸ್ವಚ್ಛತೆ ಕುರಿತು ಸ್ಥಳೀಯರಿಂದ ವಿವರವಾದ ಮಾಹಿತಿ ಪಡೆದು, ಸ್ಥಳೀಯ ನಿವಾಸಿಗಳ ಸಮಸ್ಯೆಯನ್ನು ನೇರವಾಗಿ ಆಲಿಸಿದರು.
ಈ ಕುರಿತು ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಕ್ಷಣ ಚರ್ಚಿಸಿ, ಶೀಘ್ರದಲ್ಲಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷ ಶಿವಾನಂದ್, ಪ್ರಮುಖರಾದ ಕಿರಣ್ ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಇದನ್ನೂ ಓದಿ ⇒ ಈಶ್ವರಪ್ಪ ಕುಟುಂಬದ ವಿರುದ್ಧದ ಕೇಸ್ : ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ