
ಶಿವಮೊಗ್ಗ : ಗಣಪತಿ ಹಬ್ಬದ ಪ್ರಯುಕ್ತ ನಗರದ ನ್ಯೂಮಂಡ್ಲಿಯಲ್ಲಿ ನಿರ್ಮಿಸಲಾಗಿರುವ ಭವ್ಯ ಮಹಾದ್ವಾರ ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಪೌರಾಣಿಕ ಕಲ್ಪನೆಯೊಂದಿಗೆ ವಿನ್ಯಾಸಗೊಳಿಸಿರುವ ಮಹಾದ್ವಾರವು ಗಣೇಶೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ.
ಇದನ್ನೂ ಓದಿ » ಊರುಗಡೂರಿನಲ್ಲಿ ಗಣೇಶೋತ್ಸವದ ಸಂಭ್ರಮ: ಭಕ್ತಿಭಾವದಿಂದ ಗಣಪತಿ ಪ್ರತಿಷ್ಠಾಪನೆ
ಮಹಾದ್ವಾರದ ಪ್ರಮುಖ ಆಕರ್ಷಣೆಯಾಗಿ ಗರುಡನ ಮೇಲಿರುವ ಶ್ರೀ ಮಹಾವಿಷ್ಣುವಿನ ಭವ್ಯ ಪ್ರತಿಕೃತಿ ನಿರ್ಮಿಸಲಾಗಿದೆ. ಶ್ರೀ ಮಹಾವಿಷ್ಣುವಿನ ಕೈಯಲ್ಲಿ ಸುದರ್ಶನ ಚಕ್ರವನ್ನು ಹಿಡಿದಿರುವಂತೆ ರೂಪಿಸಲಾಗಿದ್ದು, ಪೌರಾಣಿಕ ವೈಭವವನ್ನು ಪ್ರತಿಬಿಂಬಿಸುವಂತಿದೆ. ಗರುಡನ ವಿಶಾಲ ರೆಕ್ಕೆಗಳು ಹಾಗೂ ಶ್ರೀ ಮಹಾವಿಷ್ಣುವಿನ ಆಕರ್ಷಕ ಅಲಂಕಾರಿಕ ರೂಪವು ನೋಡುಗರನ್ನು ಸೆಳೆಯುತ್ತಿದೆ.
ಗಣೇಶೋತ್ಸವದ ಹಿನ್ನೆಲೆಯಲ್ಲಿ ನ್ಯೂ ಮಂಡ್ಲಿ ಸೇರಿದಂತೆ ನಗರದ ವಿವಿಧೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಭವ್ಯ ಮಹಾದ್ವಾರವು ಭಕ್ತರು ಹಾಗೂ ಸಾರ್ವಜನಿಕರಿಗೆ ವಿಶೇಷ ಆಕರ್ಷಣೆಯಾಗಿದೆ.
ಈ ಭವ್ಯ ಮಹಾದ್ವಾರವನ್ನು ಶಿಲ್ಪಿ ಜೀವನ್ ಅವರ ಕಲಾತ್ಮಕತೆಯಲ್ಲಿ ನಿರ್ಮಿಸಲಾಗಿದ್ದು, ಗಣೇಶೋತ್ಸವದ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದೆ. ವಿಭಿನ್ನ ಕಲ್ಪನೆ ಮತ್ತು ಆಕರ್ಷಕ ವಿನ್ಯಾಸದಿಂದ ಕೂಡಿರುವ ಮಹಾದ್ವಾರವು ನ್ಯೂಮಂಡ್ಲಿ ಭಾಗದಲ್ಲಿ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.
ನ್ಯೂ ಮಂಡ್ಲಿಯ ಮೂಲಕ ಸಂಚರಿಸುವ ಸಾರ್ವಜನಿಕರು ಮಹಾದ್ವಾರದ ಭವ್ಯತೆಯನ್ನು ಕಣ್ತುಂಬಿಕೊಳ್ಳುತ್ತಿದ್ದು, ಗಣೇಶೋತ್ಸವದ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಹಬ್ಬದ ವಾತಾವರಣ ಮತ್ತಷ್ಟು ಕಳೆಗಟ್ಟಿದೆ.
ಇದನ್ನೂ ಓದಿ » ಉದ್ಯೋಗಾಕಾಂಕ್ಷಿಗಳಿಗೆ Good News: ಸೆ.18 ರಂದು ನೇರ ಸಂದರ್ಶನ