ನವೀಕರಣಗೊಂಡಿರುವ ಬಸ್ ತಂಗುದಾಣ ಇಂದು ಉದ್ಘಾಟನೆ

ಶಿವಮೊಗ್ಗ : ಶಿವಮೊಗ್ಗ ನಗರದದ ಗೋಪಾಲಗೌಡ ಬಡಾವಣೆಯ ಸ್ವಾಮಿ ವಿವೇಕಾನಂದ ಸರ್ಕಲ್ (ಗುಡ್ ಲಕ್ ಸರ್ಕಲ್) ಬಳಿ ನವೀಕರಿಸಿರುವ ಬಸ್ ತಂಗುದಾಣವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಗುರುವಾರ ಉದ್ಘಾಟನೆ ಮಾಡಲಾಯಿತು.

ಈ ಬಸ್ ತಂಗುದಾಣವನ್ನು ಮಾರ್ಚ್ 2004 ರಂದು ರೋಟರಿ ಉತ್ತರ ಕ್ಲಬ್ ನ ವತಿಯಿಂದ ನಿರ್ಮಿಸಲಾಗಿತ್ತು. ಅದನ್ನು ಈಗ ಸಂಪೂರ್ಣ ದುರಸ್ಥಿ ಮಾಡಿ ನವೀಕರಣಗೊಳಿಸಿ, ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಉತ್ತರ ಕ್ಲಬ್ ನ ಅಧ್ಯಕ್ಷರಾದ ಡಾ. ಶಿವಕುಮಾರ್ ಕೆ. ರವರು, ರೋಟರಿ ಕ್ಲಬ್ ಗಳು ದೇಶದೆಲ್ಲೆಡೆ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ನಮ್ಮ ಉತ್ತರ ಕ್ಲಬ್ ಕೂಡ ಇಂತಹ ಸಾರ್ವಜನಿಕರಿಗೆ ಉಪಯೋಗ ಆಗುವಂತ ಕಾರ್ಯಕ್ರಮಗಳನ್ನು ಮೊದಲಿನಿಂದಲೂ ಮಾಡುತ್ತಾ ಬರುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಸ್ ತಂಗುದಾಣವನ್ನು ವಿನೂತನಗೊಳಿಸಲು ಸಹಕರಿಸಿದಂತ ನಾಗದೇವತೆ ದೇವಸ್ಥಾನದ ಅಧ್ಯಕ್ಷರಾದ ಶ್ರೀ ರಾಮಲಿಂಗಪ್ಪ ಮತ್ತು ಮಜ್ಜಿಗೆ ಹಾಲಪ್ಪ ಅವರನ್ನು ಸನ್ಮಾನಿಸಲಾಯಿತು.

ಸದರಿ ಕಾರ್ಯಕ್ರಮದಲ್ಲಿ ರೋಟರಿ ಉತ್ತರದ ಅಧ್ಯಕ್ಷರಾದ ಡಾ. ಶಿವಕುಮಾರ್ ಕೆ., ಕಾರ್ಯದರ್ಶಿ ಶ್ರೀಧರ್ ಎನ್., ಖಜಾಂಚಿ ವೆಂಕಟೇಶ್, ನಿರ್ದೇಶಕ ಶರವಣ, ಹಿರಿಯ ರೋಟರಿಯನ್ ಗಳಾದ ಚಂದ್ರಶೇಖರ್, ಭಾರತಿ ಚಂದ್ರಶೇಖರ, ಹಾಲಪ್ಪ ಮಜ್ಜಿಗೆ, ನರಸಿಂಹ ಪ್ರಸಾದ್, ರವೀಂದ್ರನಾಥ್ ಐತಾಳ್, ಎಸ್.ಆರ್.ನಾಗರಾಜ್, ಶೇಷಾದ್ರಿ, ರಮೇಶ್, ಸುದರ್ಶನ್, ಉಷಾ, ದತ್ತಾತ್ರಿ, ನಾಗರಾಜ್ ಕೆ.ಬಿ., ರಾಘವೇಂದ್ರ ಇನ್ನಿತರ ಸಾರ್ವಜನಿಕರು ಹಾಜರಿದ್ದರು.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...