ವರಮಹಾಲಕ್ಷ್ಮಿ ಪೂಜೆ: ಸ್ಥಿರ ಲಗ್ನದಲ್ಲಿ ಕಳಶ ಇಟ್ಟರೆ ಸಕಲ ಐಶ್ವರ್ಯ ಸಿದ್ಧಿ! ಇಲ್ಲಿದೆ ವ್ರತದ ಹಿನ್ನೆಲೆ, ಶುಭ ಸಮಯದ ವಿವರ

ಶಿವಮೊಗ್ಗ : ಮನೆಯಲ್ಲಿ ದೀರ್ಘಕಾಲದವರೆಗೆ ಸಂಪತ್ತು ಮತ್ತು ನೆಮ್ಮದಿ ನೆಲೆಸಲು ಸ್ಥಿರ ಲಗ್ನದಲ್ಲಿ ಮಹಾಲಕ್ಷ್ಮಿಯ ಕಳಶವನ್ನು ಪ್ರತಿಷ್ಠಾಪಿಸಬೇಕು.

ಪೂಜೆ ಮಾಡಲು ಇಂದಿನ ಅತ್ಯಂತ ಆಟದ ಮೂರು ಪ್ರಮುಖ ಶುಭ ಮುಹೂರ್ತಗಳು ಹೀಗಿವೆ :

  • ಸಿಂಹ ಲಗ್ನ (ಬೆಳಗ್ಗೆ) : ಬೆಳಗ್ಗೆ 06:53 ರಿಂದ 08:56 ರವರೆಗೆ (ಮನೆಯ ಪೂಜೆಗೆ ಅತ್ಯಂತ ಶ್ರೇಷ್ಠ ಸಮಯ)
  • ವೃಶ್ಚಿಕ ಲಗ್ನ (ಮಧ್ಯಾಹ್ನ) : ಮಧ್ಯಾಹ್ನ 01:35 ರಿಂದ 03:54 ರವರೆಗೆ
  • ಕುಂಭ ಲಗ್ನ (ಸಂಜೆ) : ಸಂಜೆ 07:39 ರಿಂದ ರಾತ್ರಿ 09:05 ರವರೆಗೆ

ಶಾಸ್ತ್ರೋಕ್ತವಾಗಿ ಲಕ್ಷ್ಮಿ ಕಳಶವನ್ನು ಪ್ರತಿಷ್ಠಾಪಿಸುವಾಗ ಈ 5 ವಸ್ತುಗಳನ್ನು ಇಡಲು ಮರೆಯಬೇಡಿ, ಇದರಿಂದ ಮನೆಗೆ ಅದೃಷ್ಟ ಒಲಿಯಲಿದೆ. ಕಳಶದಲ್ಲಿ ಇಡಬೇಕಾದ ಕೆಲವು ವಿಶೇಷ ವಸ್ತುಗಳೆಂದರೆ:

  • ಶುದ್ಧವಾದ ಅಕ್ಕಿ ಅಥವಾ ನೀರು (ಸಮೃದ್ಧಿಯ ಸಂಕೇತ).
  • ಒಂದು ನಾಣ್ಯ (ಚಿನ್ನ/ಬೆಳ್ಳಿ ಅಥವಾ ತಾಮ್ರದ್ದು) (ಐಶ್ವರ್ಯದ ಸಂಕೇತ).
  • ವೀಳ್ಯದೆಲೆ ಮತ್ತು ಅಡಿಕೆ (ಗೌರವ ಮತ್ತು ಶುಭದ ಸಂಕೇತ).
  • ಹಳದಿ ಕೊಂಬು (ಅರಿಶಿನದ ಬೇರು) (ಆರೋಗ್ಯ ಮತ್ತು ಮಂಗಳಕರ)
  • ಒಣ ಖರ್ಜೂರ ಅಥವಾ ಬಾದಾಮಿ (ಪೂರ್ಣತೆಯ ಸಂಕೇತ)

ವ್ರತದ ಮಹತ್ವ ಮತ್ತು ಪುರಾಣದ ಹಿನ್ನೆಲೆ :

ವರಮಹಾಲಕ್ಷ್ಮಿ ವ್ರತದ ಉಲ್ಲೇಖವು ಸ್ಕಂದ ಪುರಾಣದಲ್ಲಿ ಬರುತ್ತದೆ. ಮಗಧ ದೇಶದ ಕುಂದಿನಪುರ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ ‘ಚಾರುಮತಿ’ ಎಂಬ ಪರಮ ಪತಿವ್ರತೆ ಹಾಗೂ ಸದ್ಗುಣಶೀಲ ಮಹಿಳೆಗೆ ಮಹಾಲಕ್ಷ್ಮಿಯು ಸ್ವಪ್ನದಲ್ಲಿ ಬಂದು ಈ ವ್ರತದ ಮಹಿಮೆಯನ್ನು ತಿಳಿಸುತ್ತಾಳೆ. ಶ್ರಾವಣ ಮಾಸದ ಪೂರ್ಣಿಮೆಗೆ ಮುನ್ನ ಬರುವ ಶುಕ್ರವಾರದಂದು ಯಾರು ಭಕ್ತಿಯಿಂದ ಈ ವ್ರತವನ್ನು ಆಚರಿಸುತ್ತಾರೋ, ಅವರಿಗೆ ಅಷ್ಟಲಕ್ಷ್ಮಿಯರ ಆಶೀರ್ವಾದ ಸಿಗುತ್ತದೆ ಎಂಬುದು ನಂಬಿಕೆ.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...